ಗಮನಶ್ರಮ

ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತ • ಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ • ಕೃತಿ • ಗೀತಂ • ಸ್ವರಜತಿ • ರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲು • ಚಿತ್ರ ವೀಣ • ನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಗಮನಶ್ರಮ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೩ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಗಮಕಕ್ರಿಯ ಎಂದು ಹೆಸರಿಸಿದ್ದಾರೆ.[][]

ರಾಗ ಸ್ವರೂಪ ಮತ್ತು ಲಕ್ಷಣ

Gamanashrama scale with Shadjam at C

ಇದು ಒಂಬತ್ತನೆಯ ಬ್ರಹ್ಮ ಚಕ್ರದ ಐದನೆಯ ರಾಗ.ಇದರ ನೆನೆಪಿನ ಹೆಸರು ಬ್ರಹ್ಮ-ಮಾ ನೆನಪಿನ ನುಡಿಕಟ್ಟು:ಸ ರ ಗು ಮಿ ಪ ಧಿ ನು [] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.

ಆರೋಹಣ ಸ ರಿ೧ ಗ೩ ಮ೨ ಪ ದ೨ ನಿ೩ ಸ
ಅವರೋಹಣ ಸ ನಿ೩ ದ೨ ಪ ಮ೨ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ 'ಷಡ್ಜ, ಶುದ್ಧ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಚತುಶೃತಿ ಧೈವತಮತ್ತು ಕಾಕಲಿ ನಿಷಾಧ.

ಜನ್ಯ ರಾಗಗಳು

ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು, ಹಂಸನಂದಿ ಮತ್ತು ಪೂರ್ವಿ ಕಲ್ಯಾಣಿ ಹೆಚ್ಚು ಜನಪ್ರಿಯವಾಗಿದೆ.

ಜನಪ್ರಿಯ ರಚನೆಗಳು

ಕೆಲವು ಜನಪ್ರಿಯ ಕೃತಿಗಳು ಈ ಕೆಳಗಿನಂತಿವೆ. ಮುತ್ತುಸ್ವಾಮಿ ದೀಕ್ಷಿತರುರಚಿಸಿದ ಮೀನಾಕ್ಷಿ ಮೇಮುದಮ್ ಮತ್ತು "ಏಕಾಮ್ರನಾಥ ಭಜೇಹಮ್" ಎರಡು ವ್ಯಾಪಕವಾಗಿ ಬಳಕೆಯಲ್ಲಿರುವ ರಚನೆಗಳು.

  • ಶ್ರೀ ಚಕ್ರಪುರ ವಾಸಿನಿ- ಮುತ್ತಯ್ಯ ಭಾಗವತರ್
  • ಇದು ನೀಕು ನ್ಯಾಯಮಾ- ಮೈಸೂರು ವಾಸುದೇವಾಚಾರ್
  • ಉಭಯ ಕಾವೇರಿ - ವೀಣೆ ಶೇಷಣ್ಣ
  • ಥಾಮೇ ಸುಖಮು - ಕೋಟೀಶ್ವರ ಐಯರ್
  • ಎನ್ನಿ ಮಾರುಲು ನೆ ವಿನ್ನ- ಎಮ್.ಬಾಲಮುರಳಿಕೃಷ್ಣ

ಸಂಬಂಧಿತ ರಾಗಗಳು

ಗ್ರಹಭೇದಮ್ ಸೂತ್ರವನ್ನು ಗಮನಶ್ರಮ ರಾಗಕ್ಕೆ ಅನ್ವಯಿಸಿದಾಗ ಎರಡು ರಾಗಗಳು ದೊರೆಯುತ್ತದೆ.ಅವುಗಳು ಝಂಕಾರವರ್ಧಿನಿ ಮತ್ತು ರತ್ನಾಂಗಿ

ಉಲ್ಲೇಖಗಳು

  1. ೧.೦ ೧.೧ Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras